ವಿಶಾಖಪಟ್ಟಣ–ಮಹೆಬೂಬ್ ನಗರ ರೈಲು ರಾಯಚೂರವರೆಗೆ ವಿಸ್ತರಣೆಗೆ ಮನವಿ

Yadagiri Junction Team

Published on: 19 December, 2025

Whatsapp Group

Join Now

Telegram Group

Join Now

ನವದೆಹಲಿ: ವಿಶಾಖಪಟ್ಟಣ–ಮಹೆಬೂಬ್ ನಗರ ನಡುವೆ ಪ್ರತಿದಿನ ಸಂಚರಿಸುತ್ತಿರುವ ರೈಲನ್ನು ರಾಯಚೂರವರೆಗೆ ವಿಸ್ತರಿಸುವಂತೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಹಾಗೂ ಮಹೆಬೂಬ್ ನಗರ ಸಂಸದ ಡಿ.ಕೆ.ಅರುಣ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ಮನವಿ ಸಲ್ಲಿಸಿದರು.

ರಾಯಚೂರು ಜಿಲ್ಲಾ ಕಮ್ಮಾ ಸಮಾಜದ ಜಿಲ್ಲಾಧ್ಯಕ್ಷ ಪ್ರಸಾದ್, ಮಾಜಿ ಅಧ್ಯಕ್ಷರಾದ ಆನಂದ್, ಕೊಂಡಯ್ಯ, ರಮೇಶ್ ಬೋಸ್ ಸೇರಿದಂತೆ ಮುಖಂಡರು ಈ ಬೇಡಿಕೆ ಕುರಿತು ಸಂಸದರಿಗೆ ಮಾಹಿತಿ ನೀಡಿದ್ದು, ಉಭಯ ಸಂಸದರು ನಿಯೋಗವನ್ನು ರೈಲ್ವೆ ಸಚಿವರ ಬಳಿ ಕರೆದೊಯ್ದರು.

ಮನವಿಗೆ ಸ್ಪಂದಿಸಿದ ಸಚಿವರು, ಲಿಖಿತ ಶಿಫಾರಸು ಪತ್ರ ಸಲ್ಲಿಸಿದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರಸ್ತುತ ಈ ರೈಲು ಮಹೆಬೂಬ್ ನಗರದಲ್ಲಿ ನಿರುದ್ಯೋಗಿಯಾಗಿ ನಿಲ್ಲುತ್ತಿರುವುದರಿಂದ, ಅದನ್ನು ರಾಯಚೂರವರೆಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ರೈಲ್ವೆ ಇಲಾಖೆಗೆ ಹೆಚ್ಚುವರಿ ಆದಾಯ ದೊರೆಯಲಿದೆ ಎಂದು ಮನವಿದಾರರು ತಿಳಿಸಿದ್ದಾರೆ.